:
ಬಾದಾಮಿ: ಭಾರತ ಜೋಡೊ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಯವರೊಂ ದಿಗೆ ಹೆಜ್ಜೆ ಹಾಕಿದ ಕೆ.ಪೀ.ಸಿ.ಸಿ.ರಾಜ್ಯ ವಕ್ತಾರ ಮಹಾಂತೇಶ್. ಲಕ್ಷಣ. ಹಟ್ಟಿ
ಸನ್ಮಾನ್ಯಶ್ರೀ ರಾಹುಲ ಗಾಂಧಿಯವರನ್ನು ದಿನಾಂಕ:07-10-2022ರಂದು ನಾಗಮಂಗಲ ಪಾದಯಾತ್ರೆ ಸಂದರ್ಭದಲ್ಲಿ ಭೇಟಿಯಾಗಿ ಮಹಾಂತೇಶ ಹಟ್ಟಿಯವರು ಪಾಲ್ಗೊಂಡಿದ್ದರು. ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಮಾತನಾಡಿ,, ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಆಡಳಿತದ ಅವಧಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಸಂದರ್ಭದಲ್ಲಿ . ಗಡಿನಾಡಲ್ಲಿ ಕನ್ನಡದ ಕಲರವವನ್ನು ಬಹಳಷ್ಟು ಪ್ರಚುರ ಪಡಿಸಲಾಗಿದ್ದರ ಬಗ್ಗೆ. ನಂತರ ಕೆ. ಪಿ.ಸಿ ಸಿ.ರಾಜ್ಯ ವಕ್ತಾರ ರಾಗಿ ನೇಮಕಗೊಂಡ ಮೇಲೆ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ವಿಶೇಷವಾಗಿ ಯುವಕರಿಗೇ ಹೆಚ್ಚಿನ ಪ್ರಾಶಸ್ತ್ಯ ನೀಡಿ ಪಕ್ಷವನ್ನು ಬಲಪಡಿಸುವ ಕಾರ್ಯಗಳ ಬಗ್ಗೆ ಸನ್ಮಾನ್ಯ ಶ್ರೀ ರಾಹುಲ್ ರೊಂದಿಗೆ ಚರ್ಚೆ ಮಾಡಿ ವಿವರಣೆ ನೀಡಿದರು. ರಾಹುಲ್ ಗಾಂಧಿಯವರು ಮಹಾಂತೇಶ್ ಹಟ್ಟಿ ಯವರ ಕಾರ್ಯಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಪಕ್ಷದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪಕ್ಷವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಇದೇ ಸಂದರ್ಭದಲ್ಲಿ ಸಲಹೆ ನೀಡಿದರು.
ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ