ಪೋಷಕರು ಮಕ್ಕಳ ಮೇಲೆ ಒತ್ತಡ ಹೇರುವುದು ತಮ್ಮ ಮಕ್ಕಳ ಭವಿಷ್ಯ ರೂಪಿಸಲು ಹೊರತು ಯಾವುದೇ ತಾರತಮ್ಯಕಲ್ಲ: ಹಿರಿಯ ಸಿವಿಲ್ ನ್ಯಾಯಾಧೀಶರು ಶ್ರೀಮತಿ ಎಂ ಎಸ್ ಹರಿಣಿ

ಪಾವಗಡ ತಾಲೂಕು ಕಾನೂನು ಸೇವಾ ಸಮಿತಿ ಪಾವಗಡ ವಕೀಲರ ಸಂಘ ಮತ್ತು ಮಾನವ ಹಕ್ಕುಗಳ  ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಹಾಗೂ ಶ್ರೀಶೈಲ ಇಂಟರ್ನ್ಯಾಷನಲ್ ಸ್ಕೂಲ್ ಇವರ ಸಂಯುಕ್ತ ಆಶ್ರಯದಲ್ಲಿ 75 ಅಮೃತ ಮಹೋತ್ಸವ ಕಾರ್ಯಕ್ರಮ ಮತ್ತು ಮಾನಸಿಕ ಆರೋಗ್ಯ ಹಾಗೂ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪೋಷಕರು ಮಕ್ಕಳ ಮೇಲೆ ಒತ್ತಡ ಹಾಕುವ  ಮೂಲಕ ಪದೇ ಪದೇ ಓದುವ ಹಾಗೂ ತಮ್ಮ ನಡತೆಯಗಳ ಬಗ್ಗೆ ಒತ್ತಡ ಹೇರುವುದು ಅದು ನಿಮ್ಮ ಮಕ್ಕಳ ಭವಿಷ್ಯಕ್ಕೆ ಪೂರಕವಾಗಲೆಂಬುದು ಉದ್ದೇಶ ಹೊರೆತು  ಬೇರೆ ಯಾವುದೇ ತರಹದ ಉದ್ದೇಶ ಅವರದಾಗಿರುವುದಿಲ್ಲ.

 ಹಾಗಾಗಿ ಮಕ್ಕಳು ತಮ್ಮ ಪೋಷಕರ ಮಾತುಗಳನ್ನು ಕೇಳಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು.

ಓದುವ ಛಲ ಹಾಗೂ ನಿಷ್ಠೆಯಿಂದ ತಮ್ಮ ಗುರಿಯನ್ನು ಸಾಧಿಸಲು ಮುಂದಾಗಬಹುದು.

ಇಂದು ಆರ್ಥಿಕವಾಗಿ ಹಿಂದುಳಿದ ಅಂತಹ ಜನರಿಗೆ ಅನುಕೂಲವಾಗಲೆಂದು ಕಾನೂನು ಸೇವಾ ಪ್ರಾಧಿಕಾರ ತಮ್ಮ ಜೊತೆಯಲ್ಲಿ ಕೆಲಸ ನಿರ್ವಹಿಸುತ್ತಿದೆ.

ತಮ್ಮ ವೈಯಕ್ತಿಕ ಸಮಸ್ಯೆಗಳಿಗೆ ಆರ್ಥಿಕವಾಗಿ ಹಿಂದುಳಿದಂತಹ ಜನರಿಗೆ ನ್ಯಾಯಾಲಯ ವಿಶೇಷವಾಗಿ ತಮ್ಮ ಸಮಸ್ಯೆಯಲ್ಲಿ ಹೋಗಲಾಡಿಸಲು ತಾಲೂಕು ಸೇವಾ ಸಮಿತಿ ನಿಮ್ಮೊಂದಿಗೆ ಸದಾ ಇರುತ್ತದೆ.

ಇತ್ತೀಚೆಗೆ ಹೆಣ್ಣು ಮಕ್ಕಳ ಮೇಲೆ ವಿವಿಧ ರೀತಿಯ ಸಮಸ್ಯೆಗಳು ಕಾಣಬಹುದಾಗಿದೆ ಬಹಳಷ್ಟು ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಶಿಕ್ಷಣದಿಂದ ವಂಚಿತಗೊಳಿಸಲು ಮುಂದಾಗುತ್ತಾರೆ ಸಣ್ಣ ವಯಸ್ಸಿನಲ್ಲಿ ಮದುವೆ ಮಾಡಲು ಮುಂದಾಗುತ್ತಾರೆ.ಇಂತಹ ಎಲ್ಲೂ ಸಮಸ್ಯೆಗಳು ಹೋಗಿಲಾಡಿಸಬೇಕಾದರೆ ಮೊದಲು ಶಿಕ್ಷಣದಿಂದ ಸಾಧ್ಯ.

ಇತ್ತೀಚೆಗೆ ಕೋವಿಡ್ ಹಿನ್ನೆಲೆಯಲ್ಲಿ ಬಹಳಷ್ಟು ರೀತಿಯ ಮಾನಸಿಕ ಆರೋಗ್ಯ ಒತ್ತಡಗಳು ಜನರಲ್ಲಿ  ಕಂಡುಬಂದಿರುವುದು ನಾವು ಕಾಣಬಹುದಾಗಿದೆ.

ನಂತರ ಶ್ರೀಕಾಂತ್ ರವೀಂದ್ರ ಅವರು ಕಾರ್ಯದರ್ಶಿಗಳು ತಾಲೂಕು ಕಾನೂನು ಸೇವಾ ಸಮಿತಿ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶರು ಪಾವಗಡ ಮಾತನಾಡಿ ಒತ್ತಡದಲ್ಲಿ ಜನರು ಬದುಕುವ ದಿನಗಳು ಕರೋನ ತಂದು ನಿಲ್ಲಿಸಿದೆ.

90 ಪರ್ಸೆಂಟ್ ಮಾನಸಿಕ ಒತ್ತಡದ ತೊಡಗಿದಂತವರಿಗೆ 80 ಪರ್ಸೆಂಟ್ ಜನರಿಗೆ ಚಿಕನ್ ಸಿಗುತ್ತಿಲ್ಲ.

ಪ್ರಪಂಚದಾದ್ಯಂತ ಮಾನಸಿಕ ಸಮಸ್ಯೆಯಿಂದ 4.6 ಭಾಗ ಮಾನಸಿಕ ಒತ್ತಡಕ್ಕೆ ಬಳಸುತ್ತಿದ್ದಾರೆ ಎಂಬುದಾಗಿ ಸಮೀಕ್ಷೆ ಮೂಲಕ ತಿಳಿದು ಬಂದಿದೆ ಇದರಿಂದ ಒತ್ತಡಗಳಿಂದ ಬಹಳಷ್ಟು ಜನ ಆತ್ಮಹತ್ಯೆಗೆ ಮುಂದಾಗುತ್ತಾರೆ.

ಮುಖ್ಯವಾಗಿ ಒತ್ತಡಕ್ಕೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ಅವರ ಒತ್ತುಗಳನ್ನು ಬಗೆಹರಿಸಿಕೊಳ್ಳಬೇಕು.

ಮಾನಸಿಕ ಅಸ್ವಸ್ಥತೆಯ ಸೂಚನೆಗಳು ನಾವು ಕೋಪ ಮಾಡಿಕೊಳ್ಳುವುದು ಬೇಸರ ವ್ಯಕ್ತಪಡಿಸುವುದು ಇಂತಹ ಲಕ್ಷಣಗಳಿಂದ ಒತ್ತಡ  ಗುರುತಿಸಿಕೊಳ್ಳಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷೆ ವಹಿಸಿದ ಮಾತನಾಡಿದ ಶ್ರಿ ಶಾಲಾ ಇಂಟರ್ ನ್ಯಾಷನಲ್ ಇಂಗ್ಲೀಷ್ ಮೀಡಿಯಂ ಶಾಲೆಯ ಮುಖ್ಯೋಪಾಧ್ಯಾಯರಾದ ಮಂಜುಳಾ ನಾಗಭೂಷಣ್ ಇತ್ತೀಚೆಗೆ ಹೆಣ್ಣು ಮಕ್ಕಳ ಅಧ್ಯಯನತೆ ಎಷ್ಟರಮಟ್ಟಿಗೆ ಹಬ್ಬುತ್ತಿದೆ ಎಂಬುದಾಗಿ ಉದಾಹರಣೆಗೆ ನಮ್ಮ ರಾಷ್ಟ್ರಪತಿ ದ್ರೌಪದಿ ಮರ್ಮನ್ ರವರು ಒಂದು ಉದಾಹರಣೆ. 

ವಿವಿಧ ರಂಗಗಳಲ್ಲಿ ಹೆಣ್ಣು ಮಕ್ಕಳ ಮೇಲುಗೈ ಸಾಧಿಸುತ್ತಿರೋದು ನಾವು ಕಾಣಬಹುದಾಗಿದೆ.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಡಾಕ್ಟರ್ ಪೂಜಾ. ಡಾಕ್ಟರ್ ನಮ್ರತಾ ರವರು ಸರ್ಕಾರಿ ಆಸ್ಪತ್ರೆ ಇವರು ಮಾನಸಿಕ ಆರೋಗ್ಯ ಮತ್ತು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಬಗ್ಗೆ ಅರಿವು ಮೂಡಿಸಿದರು.

ಶ್ರೀ ಶಾಲಾ ಸಂಸ್ಥೆಯ ಅಧ್ಯಕ್ಷರಾದ ಲಕ್ಮೀವೆಂಕಟರಾಮಯ್ಯ ಮಾತನಾಡಿದರು.  ವಕೀಲರ ಸಂಘದ ಅಧ್ಯಕ್ಷರಾದ ಅಂಜನೇಯ ಮಾತನಾಡಿದರು. ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ  ವಿರೋಧಿ ಸಂಸ್ಥೆಯ ಅಧ್ಯಕ್ಷ ಇಮ್ರಾನ್ ಉಲ್ಲಾ  ಮಾತನಾಡಿದರು. ವಕೀಲೆ ದಿವ್ಯ ಮಾತನಾಡಿದರು.ವಕೀಲ ಪ್ರಭಾಕರ್ ರೆಡ್ಡಿ.ಹನಮಂತರಾಯಪ್ಪ. ಶ್ರಿ ಶಾಲಾ ಇಂಟರ್ ನ್ಯಾಷನಲ್ ಇಂಗ್ಲಿಷ್  ಶಾಲೆಯ ನಿರ್ದೇಶಕರಾದ ನಾಗೇಂದ್ರಪ್ಪ.ನ್ಯಾಯಲಯದ ಸಿಬ್ಬಂದಿಗಳಾದ ವೆಂಕಟೇಶ್. ಶಾಲೆಯ ಶಿಕ್ಷಕರಾದ ನರಸಿಂಹರೆಡ್ಡಿ.ಶಿಕ್ಷಕಿಯರು ಮತ್ತು ಮಕ್ಕಳು ಭಾಗವಹಿಸಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!