ಕೇಶಕರ್ತನಾಲಯ ಅಂಗಡಿಯಲ್ಲಿ ವಿಶೇಷವಾಗಿ ಕನ್ನಡ ರಾಜ್ಯೋತ್ಸವ ಆಚರಣೆ

ಬಾದಾಮಿ

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರೂರ ಪಟ್ಟಣದ ಕಿರಣ ಸಿದ್ದನಾಥ ಅವರ ಕರ್ನಾಟಕ ಕೇಶಕರ್ತನಾಲಯ ಅಂಗಡಿಯಲ್ಲಿ ವಿಶೇಷವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ರಾಜ್ಯಾದ್ಯಂತ ಇಂದು ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದ ಕಿರಣ ಸಿದ್ದನಾಥಾ ಎನ್ನುವವರ ಕರ್ನಾಟಕ ಕೇಷಕರ್ತನಾಲಯ(ಕ್ಶೌರಿಕ) ಅಂಗಡಿಯಲ್ಲಿ ವಿಶೇಷವಾಗಿ ಇಲ್ಲಿನ ಸರಕಾರಿ ಹೆಣ್ಣು ಮಕ್ಕಳು ತಾಯಿ ಭುವನೇಶ್ವರಿ ಮಾತೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗಿಸಿ ಜಯ ಭಾರತ ಜನನಿಯ ತನುಜಾತೆ ಕರುನಾಡ ಗೀತೆಯನ್ನು ಹಾಡುವುದರ ಮೂಲಕ ವಿಶೇಷ ಕನ್ನಡ ರಾಜ್ಯೋತ್ಸವವನ್ನು ಆಚರಿಸಿ ಕನ್ನಡ ರಾಜ್ಯೋತ್ಸವ ಕನ್ನಡ ದಾ ಬಗ್ಗೆ ಇರುವ ಕಿರಣ್ ಸಿದ್ದನಾಥ್ ಅವರ ಕನ್ನಡ ರಾಜ್ಯೋತ್ಸವ ದ ಬಗ್ಗೆ ಇರುವ ಕರುನಾಡ ಪ್ರೇಮ ಮೆಚ್ಚುವಂತಹದ್ದು.

ಇದೇ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳು, ಹಾಗೂ ಶಾಲಾ ಶಿಕ್ಷಕರು,ಶಾಲಾ ವಿದ್ಯಾರ್ಥಿಗಳು, ಹಾಗೂ ಶಾಲಾ ಸುಧಾರಣಾ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!