ಗುಬ್ಬಿ: ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀ ಬೇಟೆರಾಯಸ್ವಾಮಿ ದೇವಾಲಯದಲ್ಲಿ ಇಂದು ವೈಕುಂಠ ಏಕಾದಶಿ ಹಬ್ಬದ ಅಂಗವಾಗಿ ವೈಕುಂಠ ದ್ವಾರ ದರ್ಶನ ಕಾರ್ಯಕ್ರಮ, ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಭಕ್ತರನ್ನು ಆಕರ್ಷಿಸಿತು.

ಮುಂಜಾನೆ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ಗೋವು ಪೂಜೆ ಜೊತೆಗೆ ವೈಕುಂಠ ದ್ವಾರ ಮೂಲಕ ಸ್ವಾಮಿ ದರ್ಶನ ಪಡೆಯಲು ಅನುವು ಮಾಡಿದ್ದು, ಸಾವಿರಾರು ಭಕ್ತರು ದರ್ಶನ ಪಡೆದು ಪುಳುಕಗೊಂಡರು.
ಶ್ರೀ ಬೇಟರಾಯಸ್ವಾಮಿ ಅವರ ದರ್ಶನ ಪಡೆದ ಭಕ್ತಾದಿಗಳು ವೈಕುಂಠ ದ್ವಾರದ ಮೂಲಕ ಹೊರ ನಡೆದು ಸ್ವಾಮಿಯ ದರ್ಶನ ಪಡೆದರು. ತೀರ್ಥ ಪ್ರಸಾದ ಜೊತೆಗೆ ದಾನಿಗಳು ವಿಶೇಷ ಲಾಡು ಪ್ರಸಾದ ವಿನಿಯೋಗವನ್ನು ಆಯೋಜಿಸಿದ್ದರು. ಭಜನೆ ಕಾರ್ಯಕ್ರಮ ಕೂಡಾ ಆಯೋಜನೆ ಗೊಂಡಿತ್ತು.
ಸಂಜೆ ಹದಿನೆಂಟು ಕೋಮಿನ ಮುಖಂಡರ ಸಮ್ಮುಖದಲ್ಲಿ ಮಹಾಮಂಗಳಾರತಿ ನಡೆಯಲಿದೆ.
ದಿನವಿಡೀ ನಡೆಯುವ ಪೂಜಾ ವಿಧಿಗೆ ಆಗಮಿಸುವ ಭಕ್ತರು ಕೋವಿಡ್ ನಿಯಮಾನುಸಾರ ಸಾಮಾಜಿಕ ಅಂತರ ಕಾದು ಮಾಸ್ಕ್ ಧರಿಸಿ ದರ್ಶನ ಪಡೆದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.