ಕೊರಟಗೆರೆ: ತುಮಕೂರು ಜಿಲ್ಲೆ ಕೊರಟಗೆರೆ ಯಲ್ಲಿ ಶಿಖರ್ಜಿ ಉಳಿಸಿ ಎಂದು ಸರ್ಕಾರಗಳನ್ನು ಒತ್ತಾಯಿಸಲು ದಿನಾಂಕ 07-01-2023 ನೇ ಶನಿವಾರ ಬೆಳಿಗ್ಗೆ 9 ಗಂಟೆಗೆ ಮೌನ ಮೆರವಣಿಗೆಯನ್ನು ಹಮ್ಮಿಕೊಂಡಿದ್ದಾರೆ.
*ಕೊರಟಗೆರೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗ ದಿಂದ ಮೆರವಣಿಗೆ ಪ್ರಾರಂಭವಾಗಿ ಮಿನಿ ವಿಧಾನಸೌದದಲ್ಲಿರುವ ತಹಸೀಲ್ದಾರ್ ಕಛೇರಿ ವರೆಗೂ ಸಾಗುತ್ತದೆ*
*ತಹಸೀಲ್ದಾರ್ ರವರ ಮೂಲಕ ಜಾರ್ಖಂಡ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಲಿದ್ದಾರೆ
*ತಾಲ್ಲೂಕು ವ್ಯಾಪ್ತಿಯ ತೋವಿನಕೆರೆ, ವಡ್ಡಗೆರೆ, ಅರಸಾಪುರ, ದೊಡ್ಡಪಾಲನಹಳ್ಳಿ, ಅಕ್ಕಿರಾಂಪುರ ಮತ್ತು ಕೊರಟಗೆರೆ ಪಟ್ಟಣದವರು ಸೇರಿದಂತೆ ಜೈನ ಸಮಾಜದವರು ಮೌನ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.