ಮಧುಗಿರಿ : ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಕೃಷ್ಣ ಮೃಗವೊಂದು ಸ್ಥಳದಲ್ಲಿಯೇ ಮೃತ ಪಟ್ಟಿದೆ.
ಪಟ್ಟಣದ ಹೊರ ವಲಯದಲ್ಲಿರುವ ವರ್ತುಲ ರಸ್ತೆ ಬಿಜವಾರ ಗ್ರಾಮದ ರಸ್ತೆಯ ಸಮೀಪ ಘಟನೆ ಸಂಭಂವಿಸಿದ್ದು ಅಂಟಿ ಲೋಪ್ ತಳಿಯ ಒಂದು ವರ್ಷ ಪ್ರಾಯದ ಗಂಡು ಕೃಷ್ಣ ಮೃಗವು ರಸ್ತೆ ದಾಟುತ್ತಿದ್ದ ವೇಳೆ ಆಕಸ್ಮಿಕವಾಗಿ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ.
ಸ್ಥಳಕ್ಕೆ ಅರಣ್ಯಾಧಿಕಾರಿ ಮುತ್ತುರಾಜು ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದು ಕೃಷ್ಣ ಮೃಗದ ಕಳೇ ಬರವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿ ನಂತರ ಸುಟ್ಟು ಹಾಕಿದ್ದಾರೆ.