ಅಭಿವೃದ್ಧಿಯ ಹರಿಕಾರ, ಗ್ರಾಮಾಂತರ ಮನೆ ಮಗ ಜನಪ್ರಿಯ ಶಾಸಕ ಡಿಸಿ ಗೌರಿಶಂಕರ್ ರವರ ನಾಯಕತ್ವ, ಹೃದಯ ವೈಶಾಲ್ಯತೆಗೆ ಮೆಚ್ಚಿ ಜೆಡಿಎಸ್ ಸೇರ್ಪಡೆಗೊಂಡ ಬಿಜೆಪಿ ಪಕ್ಷದ ಸುಮಾರು 500ಕ್ಕೂ ಹೆಚ್ಚು ಒಕ್ಕಲಿಗ ಸಮುದಾಯದ ಹಿರಿಯ ಮುಖಂಡರುಗಳು
ಜನಪ್ರಿಯ ಶಾಸಕರಾದ ಡಿಸಿ ಗೌರಿಶಂಕರ್ ರವರ ಅಧ್ಯಕ್ಷತೆಯಲ್ಲಿ ನಡೆದ ತುಮಕೂರು ಗ್ರಾಮಾಂತರ ಒಕ್ಕಲಿಗ ಜನಾಂಗದ ಹಿರಿಯ ಮುಖಂಡರುಗಳ ಸಭೆಯಲ್ಲಿ ಸುಮಾರು 3000ಕ್ಕೂ ಹೆಚ್ಚು ಒಕ್ಕಲಿಗ ಸಮುದಾಯದ ಹಿರಿಯ ಮುಖಂಡರುಗಳು ಪಾಲ್ಗೊಂಡು, ಸಭೆಯನ್ನು ಅದ್ದೂರಿಯಾಗಿ ಯಶಸ್ವಿಗೊಳಿಸಿದರು,

ಹಾಗೂ ಇದೇ ಸಂದರ್ಭದಲ್ಲಿ ಜನಪ್ರಿಯ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ರವರ ರೈತಪರ ಕಾಳಜಿಗೆ ಹಾಗೂ ಸನ್ಮಾನ್ಯ ಶಾಸಕರ ಅಭಿವೃದ್ಧಿ ಕಾರ್ಯಗಳಿಗೆ, ನಾಯಕತ್ವಕ್ಕೆ, ಮೆಚ್ಚಿ ಸುಮಾರು 500ಕ್ಕೂ ಹೆಚ್ಚು ಬಿಜೆಪಿ ಯ ಹಿರಿಯ ಮುಖಂಡರುಗಳು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡು,
2023ರ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಡಿಸಿ ಗೌರಿಶಂಕರ್ ಅವರನ್ನು ಅತಿ ಹೆಚ್ಚು ಮತಗಳ ಅಂತರದಲ್ಲಿ ಮತ್ತೊಮ್ಮೆ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸುವ ಮೂಲಕ ಕುಮಾರಸ್ವಾಮಿ ಕೈ ಬಲಪಡಿಸುವುದಾಗಿ ಅಭಯ ನೀಡಿದರು.