ಗುಬ್ಬಿ ಕ್ಷೇತ್ರದಲ್ಲಿ ವೀರಶೈವ ಲಿಂಗಾಯಿತರಿಗೆ ಬಿಜೆಪಿ ಟಿಕೆಟ್ ನೀಡುವಂತೆ ಒತ್ತಾಯಿಸಿದ ಸಮುದಾಯದ ಮುಖಂಡರು.

ಗುಬ್ಬಿ: ಕಳೆದ 22 ವರ್ಷದಿಂದ ಮೌನಕ್ಕೆ ಶರಣಾದ ವೀರಶೈವ ಲಿಂಗಾಯಿತ ಸಮುದಾಯ ಯುಡಿಯೂರಪ್ಪ ಅವರ ನಾಯಕತ್ವ ಒಪ್ಪಿ ಚುನಾವಣೆ ನಡೆಸಿದೆ. ಬಾರಿ ಪ್ರತಿ ಬಾರಿ ಅವಕಾಶ ವಂಚಿತರಾದ ನಾವುಗಳು ಈ ಬಾರಿ ಗುಬ್ಬಿ ಕ್ಷೇತ್ರದಲ್ಲಿ ವೀರಶೈವ ಲಿಂಗಾಯಿತ ಅಭ್ಯರ್ಥಿಯ ಗೆಲ್ಲಿಸಿ ಶಾಸಕರನ್ನಾಗಿ ಆಯ್ಕೆ ಮಾಡಲು ಬದ್ಧವಾಗಿದೆ. ಬಿಜೆಪಿ ಈ ಬಾರಿ ವೀರಶೈವ ಲಿಂಗಾಯಿತ ಸಮುದಾಯಕ್ಕೆ ಮಾನ್ಯತೆ ನೀಡಿ ಗುಬ್ಬಿ ಕ್ಷೇತ್ರದಲ್ಲಿರುವ ನಮ್ಮ ಸಮುದಾಯದ ಮೂವರಲ್ಲಿ ಯಾರಿಗಾದರೂ ಟಿಕೆಟ್ ನೀಡಬೇಕು ಎಂದು ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾ ನಿರ್ದೇಶಕ ಎನ್.ಸದಾಶಿವಯ್ಯ ಒತ್ತಾಯಿಸಿದರು.

ಪಟ್ಟಣದ ಹೊರ ವಲಯದ ಹೇರೂರು ಬಳಿಯ ಶ್ರೀ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ವೀರಶೈವ ಲಿಂಗಾಯಿತ ಸಮುದಾಯದ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹಿಂದುಳಿದ ವರ್ಗಕ್ಕೆ ಎರಡು ಬಾರಿ ಹೋರಾಟ ಮಾಡಿದ ನಮ್ಮ ಸಮಾಜ ಕ್ಷೇತ್ರದಲ್ಲಿ ಅತೀ ಹೆಚ್ಚು ಮತ ಇದ್ದು ನಿರ್ಣಾಯಕ ಎನಿಸಿದ್ದೇವೆ. ಜಿಲ್ಲೆಯಲ್ಲಿ ಮೂರು ಕ್ಷೇತ್ರಕ್ಕೆ ನಮ್ಮ ಸಮುದಾಯಕ್ಕೆ ಮನ್ನಣೆ ನೀಡಬೇಕಿದೆ. ವೀರಶೈವ ಲಿಂಗಾಯಿತ ಅಭ್ಯರ್ಥಿಗೆ ಗುಬ್ಬಿ ಕ್ಷೇತ್ರಕ್ಕೆ ನಿಲ್ಲಿಸಿದ್ದಲ್ಲಿ ಅಕ್ಕಪಕ್ಕದ ಐದಾರು ಕ್ಷೇತ್ರಕ್ಕೆ ಅನುಕೂಲವಾಗುವ ಲೆಕ್ಕಾಚಾರ ಮರೆಯಬಾರದು ಎಂದರು.

ಗುಬ್ಬಿಯಲ್ಲಿ ಬಿಜೆಪಿಗೆ ವೀರಶೈವ ಲಿಂಗಾಯಿತ ಅಭ್ಯರ್ಥಿ ನಿಲ್ಲಿಸಿದರೆ ಗೆಲ್ಲುವ ಎಲ್ಲಾ ಅವಕಾಶವೇ ಹೆಚ್ಚು ಕಾಣುತ್ತಿದೆ. ಗೆಲ್ಲುವ ಮಾನದಂಡ ಅನುಸರಿಸಿದರೆ ಅರ್ಹತೆಯೂ ಇರುವ ಮೂವರು ಪ್ರಬಲ ಆಕಾಂಕ್ಷಿಗಳು ನಮ್ಮ ಸಮಾಜದಲ್ಲಿದ್ದಾರೆ. ದಿಲೀಪ್ ಕುಮಾರ್, ಚಂದ್ರಶೇಖರಬಾಬು ಹಾಗೂ ಎನ್.ಸಿ.ಪ್ರಕಾಶ್ ಈ ಮೂವರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಸಿಕೊಡುತ್ತೇವೆ. ನಮ್ಮ ಹೆಚ್ಚು ಮತಗಳ ಜೊತೆ ಬೇರೆ ಸಮುದಾಯವನ್ನು ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಗೆಲ್ಲಿಸುತ್ತೇವೆ ಎಂದ ಅವರು ಅವಕಾಶ ಕಳೆದುಕೊಂಡ ನಮ್ಮ ಸಮಾಜ ಒಕ್ಕೊರಲಿನ ಅಭಿಪ್ರಾಯ ವ್ಯಕ್ತಪಡಿಸಿದ್ದು ಈ ಬಾರಿ ವೀರಶೈವ ಲಿಂಗಾಯಿತ ಸಮುದಾಯ ಅಭ್ಯರ್ಥಿಗೆ ಅವಕಾಶ ನೀಡಲೇಬೇಕು. ಇದು ತಾಯಿಯ ಗಮನ ಸೆಳೆಯಲು ಮಗು ಅಳುವ ರೀತಿಯ ಬೇಡಿಕೆ ಇದಾಗಿದೆ. ಕೂಡಲೇ ಬಿಜೆಪಿ ವರಿಷ್ಠರು ಗುಬ್ಬಿ ಕ್ಷೇತ್ರಕ್ಕೆ ವೀರಶೈವ ಲಿಂಗಾಯಿತ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.

ತುಮಕೂರು ವಿವಿ ಮಾಜಿ ಸೆನೆಟ್ ಸದಸ್ಯ ಉಮಾಮಹೇಶ ಮಾತನಾಡಿ ಹಿಂದುಳಿದ ವರ್ಗಕ್ಕೆ ಅವಕಾಶ ಇರುವ ಮಧುಗಿರಿ ಕ್ಷೇತ್ರದಲ್ಲಿ ಟಿಕೆಟ್ ನೀಡಬಹುದು. ವೀರಶೈವ ಲಿಂಗಾಯಿತ ಅಭ್ಯರ್ಥಿ ಗೆಲ್ಲುವ ಅವಕಾಶ ತಪ್ಪಿಸುವುದು ಸರಿಯಲ್ಲ. ತುಮಕೂರು ಮತ್ತು ಚಿಕ್ಕನಾಯಕನಹಳ್ಳಿ ಎರಡು ಕ್ಷೇತ್ರಕ್ಕೆ ಅವಕಾಶ ನೀಡಿದಂತೆ ಗುಬ್ಬಿಗೆ ಅವಕಾಶ ನೀಡಿ ಜಿಲ್ಲೆಯಲ್ಲಿ ಸಾಕಷ್ಟು ಕ್ಷೇತ್ರದಲ್ಲಿ ಗೆಲುವು ಸೋಪಾನ ಇದಾಗಲಿದೆ. ಯಡಿಯೂರಪ್ಪ ಅವರ ಮುಖಂಡತ್ವ ನಾವು ಒಪ್ಪಿ ನಡೆಸಿದ್ದೇವೆ. ಈ ಬಾರಿ ಟಿಕೆಟ್ ತಪ್ಪಿದರೆ ಬದಲಾಗುವ ಪರಿಸ್ಥಿತಿಗೆ ನಮ್ಮನ್ನು ದೋಷಿಸಬಾರದು ಎಂದರು.

ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಪರಮಶಿವಯ್ಯ ಮಾತನಾಡಿ ಈ ಹಿಂದೆ ಎರಡು ಬಾರಿ ಬೆಟ್ಟಸ್ವಾಮಿ ಪರ ಶೇಕಡಾ 80 ರಷ್ಟು ಮತ ನೀಡಿe ಬೆಂಬಲ ಸೂಚಿಸಿರುವ ವೀರಶೈವ ಲಿಂಗಾಯಿತ ಸಮುದಾಯ ತೋರಿದ ಪ್ರಾಮಾಣಿಕತೆಯನ್ನು ಮುಂದಿಟ್ಟುಕೊಂಡು ಈ ಬಾರಿ ನಮಗೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ವೀರಶೈವ ಲಿಂಗಾಯಿತ ಮಹಾಸಭಾ ತಾಲ್ಲೂಕು ಅಧ್ಯಕ್ಷ ಹೇರೂರು ರಮೇಶ್, ವೀರಶೈವ ಲಿಂಗಾಯಿತ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಸಿದ್ದಲಿಂಗಮೂರ್ತಿ, ಮುಖಂಡರಾದ ಪಣಗಾರ್ ನಿಜಲಿಂಗಪ್ಪ, ಬಂಡಿಹಳ್ಳಿ ಶಿವಣ್ಣ, ಶಿವರಾಮಯ್ಯ, ಬಾಳೆಕಾಯಿ ಬಸವರಾಜು, ಗಂಗಾಧರ್, ವಿಜಯಕುಮಾರ್, ದಯಾನಂದ, ನಟರಾಜು, ಆರ್.ಬಿ.ಜಯಣ್ಣ, ಸಿದ್ದರಾಮಣ್ಣ, ರೇಣುಕಪ್ಪ, ಗುರುವಣ್ಣ ಸೇರಿದಂತೆ ತಾಲ್ಲೂಕಿನ ಹಲವು ಸಮಾಜದ ಮುಖಂಡರು ಭಾಗವಹಿಸಿದ್ದರು.

ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.

You May Also Like

error: Content is protected !!