ಕೊರಟಗೆರೆ ಕ್ಷೇತ್ರದ 105ಕೆರೆಗಳಿಗೆ ಎತ್ತಿನಹೊಳೆ ನೀರು: ಡಾ.ಜಿ.ಪರಮೇಶ್ವರ್

ಕೊರಟಗೆರೆ:- ಬಯಲುಸೀಮೆ ಪ್ರದೇಶದ ಜಿಲ್ಲೆಗಳ ರೈತಾಪಿವರ್ಗಕ್ಕೆ 28ಸಾವಿರ ಕೋಟಿ ವೆಚ್ಚದ ಎತ್ತಿನಹೊಳೆ ಯೋಜನೆ ಸಹಕಾರಿ ಆಗಿದೆ. ಕೊರಟಗೆರೆ ಕ್ಷೇತ್ರದ 105ಕೆರೆಗಳಿಗೆ ಎತ್ತಿನಹೊಳೆ ಯೋಜನೆಯ ನೀರು ಹರಿಯಲಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ರೈತಾಪಿವರ್ಗಕ್ಕೆ ಅಂಕಿಅAಶದ ಮಾಹಿತಿ ನೀಡಿದರು.

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಹೊಳವನಹಳ್ಳಿ, ಕೋರಾ, ಕೋಳಾಲ ಮತ್ತು ಚನ್ನರಾಯನದುರ್ಗ ಹೋಬಳಿ ವ್ಯಾಪ್ತಿಯ ಬೆಂಡೋಣಿಯ ವಿಎಸ್‌ಎಸ್‌ಎನ್ ಕಟ್ಟಡದ ಉದ್ಘಾಟನೆ ಮತ್ತು 3ಕೋಟಿ 5೦ಲಕ್ಷ ವೆಚ್ಚದ ವಿವಿಧ ನೀರಾವರಿ ಅಭಿವೃದ್ದಿ ಕಾಮಗಾರಿಗಳಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಸಹಕಾರಿ ರತ್ನ ಕೆ.ಎನ್.ರಾಜಣ್ಣ ನೇತೃತ್ವದ ಕಲ್ಪತರು ನಾಡಿನ ಡಿಸಿಸಿ ಬ್ಯಾಂಕು 2ಸಾವಿರ ಕೋಟಿ ಲಾಭದಲ್ಲಿದೆ. ರೈತಾಪಿವರ್ಗ ಮತ್ತು ಬಡಜನತೆಯ ಪರವಾದ ಯೋಜನೆಗಳನ್ನು ರೂಪಿಸಿರುವ ತುಮಕೂರಿನ ಡಿಸಿಸಿ ಬ್ಯಾಂಕು ಕರ್ನಾಟಕ ರಾಜ್ಯಕ್ಕೆ ಮಾದರಿಯಾಗಿ ರಾಷ್ಟç ಮನ್ನಣೆ ಗಳಿಸಿದೆ. ಕೊರಟಗೆರೆ ಕ್ಷೇತ್ರದಲ್ಲಿನ 18ಸಹಕಾರಿ ಬ್ಯಾಂಕುಗಳು ರೈತರಿಗೆ ಅನುಕೂಲಕರ ರೀತಿಯಲ್ಲಿ ಕೆಲಸ ಮಾಡುತ್ತೀವೆ ಎಂದು ಸಂತಷ ವ್ಯಕ್ತಪಡಿಸಿದರು.

ಕೊರಟಗೆರೆ ಕ್ಷೇತ್ರದ ಜನತೆಯ ಆರ್ಶಿವಾದದಿಂದ ನಾನು ಕರ್ನಾಟಕ ರಾಜ್ಯದ ಡಿಸಿಎಂ ಆಗುವ ಅವಕಾಶ ದೊರೆತಿದೆ. ನನ್ನ ಕ್ಷೇತ್ರದ ಜನತೆಯ ಮನವಿಗೆ ತಕ್ಕಂತೆ ಅಭಿವೃದ್ದಿಯ ಕೆಲಸ ಮಾಡಿದ್ದೇನೆ. ಇಂದು ನೀರಾವರಿಯ ಅಭಿವೃದ್ದಿಗೆ 3ಕೋಟಿ ವೆಚ್ಚದ ವಿವಿಧ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಚೆಕ್‌ಡ್ಯಾಂ ಮತ್ತು ಕೆರೆಕಟ್ಟೆ ನಿರ್ಮಾಣದಿಂದ ಭೂಮಿಯ ಅಂತರ್ಜಲ ಅಭಿವೃದ್ದಿ ಆಗಲಿದೆ ಎಂದರು.

ಕೊರಟಗೆರೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅರಕೆರೆಶಂಕರ್ ಮಾತನಾಡಿ ಕೊರಟಗೆರೆ ಕ್ಷೇತ್ರದಲ್ಲಿ ಕೋಟ್ಯಾಂತರ ರೂ ವೆಚ್ಚದಲ್ಲಿ ವಸತಿಶಾಲೆ, ರಸ್ತೆ ಅಭಿವೃದ್ದಿ ಮತ್ತು ಚೆಕ್‌ಡ್ಯಾಂಗಳ ನಿರ್ಮಾಣ ಆಗಿವೆ. ಸಮಗ್ರ ಅಭಿವೃದ್ದಿಯ ವಿಚಾರದಲ್ಲಿ ಕೊರಟಗೆರೆ ಕ್ಷೇತ್ರ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಆಗಲಿದೆ. ಜನಪ್ರೀಯ ಶಾಸಕರಾದ ಡಾ.ಜಿ.ಪರಮೇಶ್ವರ್ ಕೊರಟಗೆರೆ ಕ್ಷೇತ್ರಕ್ಕೆ ಶಾಶ್ವತ ಅಭಿವೃದ್ದಿಯ ಯೋಜನೆ ತರುವಲ್ಲಿ ಯಶಸ್ವಿ ಆಗಿದ್ದಾರೆ ಎಂದು ಮಾಹಿತಿ ನೀಡಿದರು.

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಹಿರೇತೊಟ್ಲುಕೆರೆ ಕೆರೆ ಅಭಿವೃದ್ದಿಗೆ 20ಲಕ್ಷ, ಓಬನಹಳ್ಳಿ ಅರಣ್ಯದಲ್ಲಿ ಚೆಕ್‌ಡ್ಯಾಂಗೆ ೫೦ಲಕ್ಷ, ಬೆಂಡೋಣಿ ವಿಎಸ್‌ಎಸ್‌ಎನ್ ಕಟ್ಟಡ ಉದ್ಘಾಟನೆ, ಹೊಳವನಹಳ್ಳಿ ರೈತ ಸಂಪರ್ಕ ಕೇಂದ್ರಕ್ಕೆ 6೦ಲಕ್ಷ, ಅಳಾಲಸಂದ್ರ ಚೆಕ್‌ಡ್ಯಾಂಗೆ 5೦ಲಕ್ಷ, ಮತ್ತು ಕೋಳಾಲದಲ್ಲಿ ರೈತ ಸಂಪರ್ಕ ಕೇಂದ್ರಕ್ಕೆ 6೦ಲಕ್ಷ, ಚೆಕ್‌ಡ್ಯಾಂಗೆ 7೦ಲಕ್ಷ ಸೇರಿ ಒಟ್ಟು ೩ಕೋಟಿ, ೫೦ಲಕ್ಷ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆಯನ್ನು ಶಾಸಕ ಡಾ.ಜಿ.ಪರಮೇಶ್ವರ್ ನೇರವೆರಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಉಪನಿರ್ದೆಶಕಿ ದೀಪಾಶ್ರೀ, ಡಿಸಿಸಿ ಬ್ಯಾಂಕು ನಿರ್ದೆಶಕ ಹನುಮಾನ್, ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅರಕೆರೆಶಂಕರ್, ಅಶ್ವತ್ಥನಾರಾಯಣ, ಜಯಮ್ಮ, ತಾಪಂ ಮಾಜಿ ಅಧ್ಯಕ್ಷ ಟಿ.ಸಿ.ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ಡಿಸಿಸಿ ಬ್ಯಾಂಕು ಮೇಲ್ವಿಚಾರಕ ಬೋರಣ್ಣ, ಬೆಂಡೋಣಿ ಅಧ್ಯಕ್ಷ ಶಿವಲಿಂಗಯ್ಯ, ಕೃಷಿ ಇಲಾಖೆ ನಿರ್ದೆಶಕ ನಾಗರಾಜು, ಜಿಪಂ ಎಇಇ ಮಂಜುನಾಥ, ಸಣ್ಣ ನೀರಾವರಿ ಎಇಇ ರಮೇಶ್ ಸೇರಿದಂತೆ ಇತರರು ಇದ್ದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!