ಪತ್ರಕರ್ತನ ಮೇಲೆ ಹಲ್ಲೆ ಖಂಡಿಸಿ ಕಾರ್ಯ ನಿರತ ಪತ್ರಕರ್ತರ ಸಂಘ ಧರಣಿ

ಗುಬ್ಬಿ: ಸಾರ್ವಜನಿಕ ಸ್ಥಳದಲ್ಲಿ ಬೈಕ್ ಅಡ್ಡಗಟ್ಟಿ ಪತ್ರಕರ್ತ ಜಿ.ಆರ್.ರಮೇಶ್ ಗೌಡ ಅವರ ಮೇಲೆರಗಿದ ದುಷ್ಕರ್ಮಿಗಳ ಗುಂಪು ಹಲ್ಲೆ ಮಾಡಿದ ಪ್ರಕರಣ ತೀವ್ರ ಖಂಡನೀಯ. ಈ ಘಟನೆ ಸರ್ಕಾರದ ಗಮನಕ್ಕೆ ತಂದು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ತಾಲ್ಲೂಕು ಆಡಳಿತಕ್ಕೆ ಗುಬ್ಬಿ ತಾಲ್ಲೂಕು ಕಾರ್ಯ ನಿರತ ಪತ್ರಕರ್ತರ ಸಂಘ ಆಗ್ರಹಿಸಿ ಸೋಮವಾರ ಮನವಿಪತ್ರ ಸಲ್ಲಿಸಿತು.

ಮಧ್ಯಾಹ್ನದ ವೇಳೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರ ಪಕ್ಕದ ರಸ್ತೆಯಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ವರದಿಗಾರ ರಮೇಶ್ ಗೌಡ ಅವರನ್ನು ಅಡ್ಡಗಟ್ಟಿ ಮನಬಂದಂತೆ ಥಳಿಸಿದ ದುಷ್ಕರ್ಮಿಗಳ ತಂಡವನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲು ಸಂಘದ ಅಧ್ಯಕ್ಷ ಎಸ್.ಟಿ.ಆಂಜಿನಪ್ಪ ಒತ್ತಾಯಿಸಿದರು.

ಸಾಮಾಜಿಕ ಕಳಕಳಿ ಹೊಣೆ ಹೊತ್ತ ಓರ್ವ ಪತ್ರಕರ್ತರಿಗೆ ರಕ್ಷಣೆ ಸಿಗದಿದ್ದಲ್ಲಿ ಸಾಮಾನ್ಯರ ಬಗ್ಗೆ ಚಿಂತಿಸಬೇಕಿದೆ. ವರದಿಗಾಗಲಿ ಅಥವಾ ವೈಯಕ್ತಿಕ ವಿಚಾರವೇ ಆಗಿದ್ದರೂ ಕಾನೂನು ರೀತಿ ಪ್ರಶ್ನಿಸಬಹುದಿತ್ತು. ಈ ರೀತಿ ಕಾನೂನು ಕೈಗೆ ತೆಗೆದುಕೊಳ್ಳುವುದು ಎಷ್ಟರಮಟ್ಟಿಗೆ ಸರಿ. ಸಮಾಜ ತಿದ್ದುವ ಜವಾಬ್ದಾರಿ ಹೊತ್ತ ಪತ್ರಕರ್ತರಲ್ಲಿ ಭಯ ಹುಟ್ಟಿಸುವ ಇಂತಹ ಘಟನೆ ಮರುಕಳಿಸದಂತೆ ಸರ್ಕಾರದ ಗಮನಕ್ಕೆ ತರುವಂತೆ ಆಗ್ರಹಿಸಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್ ಬಿ.ಆರತಿ ಈ ಹಲ್ಲೆ ಪ್ರಕರಣ ನಡೆಯಬಾರದಿತ್ತು. ಈ ಘಟನೆ ಬಗ್ಗೆ ಪೊಲೀಸರ ಜೊತೆ ಮಾತನಾಡಿ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಸೂಚಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕೆ.ಟಿ.ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ದೊಡ್ಡಗುಣಿ ಪ್ರಸನ್ನ, ಸದಸ್ಯರಾದ ಜಿ.ಪಿ.ವೀರಭದ್ರಯ್ಯ, ಚೇಳೂರು ಕೆಂಪರಾಜು, ಕೋಟೆ ಮೋಹನ್, ಆನಂದ್ ದೀಕ್ಷಿತ್, ಮೆಳೆಕಲ್ಲಹಳ್ಳಿ ಯೋಗೀಶ್, ಶಾಂತರಾಜು, ರಾಜೇಶ್ ಗುಬ್ಬಿ, ನರಸಿಂಹಮೂರ್ತಿ ಇತರರು ಇದ್ದರು.

You May Also Like

error: Content is protected !!