ಕಡಬ ಬಳಿ ಯುವಕನ ಶವ ಪತ್ತೆ : ಕೊಲೆ ಮಾಡಿರುವ ಶಂಕೆ

ಗುಬ್ಬಿ: ತಾಲ್ಲೂಕಿನ ಕಡಬ ಗ್ರಾಮದ ವಿದ್ಯುತ್ ಉಪಸ್ಥಾವರ ಹಿಂಬದಿಯ ನಿರ್ಜನ ಪ್ರದೇಶದಲ್ಲಿ ಯುವಕನ ಶವ ಪತ್ತೆಯಾಗಿದ್ದು ಕೊಲೆ ಮಾಡಿರುವ ಶಂಕೆಯನ್ನು ಗುಬ್ಬಿ ಪೊಲೀಸರು ವ್ಯಕ್ತಪಡಿಸಿದ್ದಾರೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ನಾರಸಿಹಳ್ಳಿ ಗೊಲ್ಲರಹಟ್ಟಿ ಯುವಕ ಯೋಗೀಶ್ (26) ಶವವಾಗಿ ಪತ್ತೆಯಾಗಿದ್ದು,
ಗುಬ್ಬಿ ತಾಲ್ಲೂಕಿನ ಕಡಬ ಸಮೀಪದ ತಿಮ್ಮೇಗೌಡನಹಟ್ಟಿ ಗ್ರಾಮದ ಸಂಬಂಧಿಕರ ಮನೆಯಲ್ಲಿ ಕಳೆದ ನಾಲ್ಕೈದು ದಿನದಿಂದ ತಂಗಿದ್ದ ಮೃತ ಯುವಕನ ಶವ ಕಡಬ ಸಮೀಪ ದೊರಕಿದೆ. ಮೃತನ ಬೈಕ್ ಸಹ ಶವ ಪತ್ತೆಯಾದ ಸ್ಥಳದಲ್ಲೇ ನಿಂತಿದೆ. ಹಲ್ಲೆ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಗುಬ್ಬಿ ಸಿಪಿಐ ನದಾಫ್ ನೇತೃತ್ವದ ತಂಡ ತೀವ್ರ ತನಿಖೆ ಆರಂಭಿಸಿದೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಪರಿಶೀಲನೆ ನಡೆಸಿದ್ದಾರೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!